ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ !

ಆರಗ ಜ್ಞಾನೇಂದ್ರ ನೂತನ ಗೃಹ ಸಚಿವರಾದ ಬೆನ್ನಲೆ ವಾಹನ ಸವಾರರಿಗೆ ಸಂತಸದ ಸುದ್ದಿಯೊಂದನ್ನುನೀಡಿದ್ದು ವಾಹನ ಸವಾರರು ಇನ್ನು ಮುಂದೆ ಸ್ಪಾಟ್ ಫೈನ್ ಕಟ್ಟುವ ಅವಶ್ಯಕತೆ ಇಲ್ಲಎಂದು ಸ್ಪಷ್ಟ ಪಡಿಸಿದ್ದಾರೆ ಅಂದರೆ ರಸ್ತೆ ಬದಿ ನಿಂತು ಯಾವುದೇ ಫೈನ್ ಕಟ್ಟುವಹಾಗಿಲ್ಲ ಎಂದು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸ್ಥಳದಲ್ಲೇ ದಂಡ ಪಾವತಿಯನ್ನು ರದ್ದು ಗೊಳಿಸುವಂತೆ ಅವರು ಆದೇಶಿಸಿದ್ದಾರೆ. ಜೊತೆಗೆ ಟ್ರಾಫಿಕ್ ಪೊಲೀಸರು ಬಳಸುತ್ತಿರುವ ಪಿಡಿಎ ದಂಡ ಪಾವತಿಯ ಯಂತ್ರವನ್ನು ಆಯಾ ಠಾಣೆಗೆ ಹಿಂದಿರುಗಿಸುವಂತೆ ಅವರು ತಿಳಿಸಿದ್ದಾರೆ.

ಒಂದೆಡೆ ಪೆಟ್ರೋಲ್ ಡಿಸೈಲ್ ದರ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇಂತಹ ಕಾನೂನು ಜಾರಿಗೊಳಿಸಿದ್ದು ಸಾರ್ವಜನಿಕರಿಗೆ ಸಂತಸವಾಗಿದೆ.

ದಿನಕ್ಕೆ ನೂರು ರೂಪಾಯಿ ದುಡಿಯುವ ಜನರು ಪೊಲೀಸರಿಗೆ ಆಹಾರವಾಗುತ್ತಿದ್ದಾರೆ, ಕೋರೋಣ ಸಂದರ್ಭದಲ್ಲಿ ತತ್ತರಿಸಿ ಹೋದ ಜನ ಸಾಮಾನ್ಯ ಈಗಲಾದರೂ ಪೊಲೀಸರಿಂದ ಆಗುವ ತೊಂದರೆಗಳಿಂದ ಮುಕ್ತಿ ಸಿಗುವ ಕಾಲ ಇನ್ನೇನು ದೂರದಲ್ಲಿಲ್ಲ!

Picture of ವರ್ಷಿಣಿ

ವರ್ಷಿಣಿ

ವರ್ಷಿಣಿ ಉದ್ಯೋಗ ಬಿಂದು ವೆಬ್‌ಸೈಟ್‌ನ ಸಕ್ರಿಯ ಬರಹಗಾರ್ತಿ ಮತ್ತು ಸಂಪಾದಕಿ. ಉದ್ಯೋಗ ಅಧಿಸೂಚನೆಗಳು, ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಸುದ್ದಿಗಳು ಹಾಗೂ ಶೈಕ್ಷಣಿಕ ಮಾಹಿತಿಗಳನ್ನು ಸಂಗ್ರಹಿಸುವುದು, ಪರಿಶೀಲಿಸುವುದು ಮತ್ತು ಸ್ಪಷ್ಟವಾಗಿ ಪ್ರಸ್ತುತಪಡಿಸುವಲ್ಲಿ ವರ್ಷಿಣಿಗೆ ಅನುಭವವಿದೆ. ಅವರು ನಿಖರ ಮತ್ತು ನಂಬಿಗಸ್ಥ ಮಾಹಿತಿಯನ್ನು ಓದುಗರಿಗೆ ತಲುಪಿಸುವುದೇ ತಮ್ಮ ಉದ್ದೇಶವಾಗಿ ಇಟ್ಟುಕೊಂಡಿದ್ದಾರೆ.

Scroll to Top