ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನೇಮಕಾತಿ 2021

ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಬೆಂಗಳೂರು ಪ್ರಾಂತ್ಯ ಮತ್ತು ಮೈಸೂರು ಪ್ರಾಂತ್ಯದ ಅರ್ಜಿಗಳನ್ನು ನಿರ್ವಹಿಸಲು ಒಟ್ಟು ಎರಡು “ಕಾನೂನು ಸಲಹೆಗಾರರ” ಹುದ್ದೆಗಳ ಸೇವೆಯನ್ನು ಪಡೆಯಲು ಉದ್ದೇಶಿಸಲಾಗಿದ್ದು,

ಕಾನೂನು ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ (ಕೆ.ಎ.ಟಿ) / ಉಚ್ಛನ್ಯಾಯಾಲಯ / ಸಹಕಾರಿ ನ್ಯಾಯಾಲಯ /ಕರ್ನಾಟಕ ಮಾಹಿತಿ ಹಕ್ಕು ಆಯೋಗ / ಗ್ರಾಹಕರ ರಕ್ಷಣಾ ವೇದಿಕೆ ಮತ್ತು ಇತರ ಶಾಸನದತ್ತ ಪ್ರಾಧಿಕಾರಗಳಲ್ಲಿ / ನ್ಯಾಯಾಲಯಗಳಲ್ಲಿ ಅರ್ಜಿಯನ್ನು ನಿರ್ವಹಿಸಿರುವ ಹತ್ತು(10) ವರ್ಷಗಳ ಅನುಭವ ಹೊಂದಿರುವ ಆಸಕ್ತಿವುಳ್ಳ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ತಮ್ಮ ಸಂಪೂರ್ಣ ಮಾಹಿತಿಯೊಂದಿಗೆ ಮುಚ್ಚಿದ ಲಕೋಟೆಯಲ್ಲಿ ಈ ಕೆಳಗೆ ನೀಡಿರುವ ವಿಳಾಸಕ್ಕೆ ದಿನಾಂಕ 15 ಮಾರ್ಚ್ 2021 ರೊಳಗೆ ತಲುಪುವಂತೆ ಅರ್ಜಿ ಸಲ್ಲಿಸಬೇಕು

ಒಟ್ಟು ಹುದ್ದೆಗಳು: 02

ಉದ್ಯೋಗ ಸ್ಥಳ: ಮಂಡ್ಯ

ಅರ್ಜಿ ಸಲ್ಲಿಸಬೇಕಾದ ವಿಳಾಸ :

“ವ್ಯವಸ್ಥಾಪಕ ನಿರ್ದೇಶಕರು, ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ, ಮಂಡ್ಯ”

ಲಕೋಟೆಯ ಮೇಲೆ ಕಾನೂನು ಸಲಹೆಗಾರರ ಸೇವೆಗಾಗಿ ಅರ್ಜಿ ಎಂದು ನಮೂದಿಸಿ ಮೇಲ್ಕಂಡ ವಿಳಾಸಕ್ಕೆ ಸಲ್ಲಿಸತಕ್ಕದ್ದು.

ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಕೆಳಗಡೆ ನೀಡಿರುವ ಅಧಿಕೃತ ಪತ್ರಿಕಾ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 19 ಫೆಬ್ರುವರಿ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಮಾರ್ಚ್ 2021

error: Content is protected !!